ಚಕ್ರವರ್ತಿ ದಿ ಹೀರೋ – ಚಂದ್ರಚೂಡ್ ವಿಶೇಷ ಪಾತ್ರ

ಕೇಳು ಜನಮೇಜಯ

ಮತ್ತೊಂದು ಸಾಹಸದ ಚಿತ್ರ

ಸದಾ ಏನಾದರೊಂದು ಸುದ್ದಿಯಲ್ಲಿರುವ ಚಕ್ರವರ್ತಿ ಚಂದ್ರಚೂಡ ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಪತ್ರಕರ್ತರಾಗಿ, ಒಳ್ಳೆಯ ಮಾತುಗಾರರಾಗಿ, ನಿರ್ದೇಶಕರಾಗಿ, ನಟರಾಗಿ ಸೈ ಎನಿಸಿಕೊಂಡಿರುವ ಅವರೀಗ, ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿರುವ ಚಂದ್ರಚೂಡ್, ಹೀಗೊಂದು ವಿಭಿನ್ನ ಶೀರ್ಷಿಕೆ ಇರುವ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ಅಣಿಯಾಗಿದ್ದಾರೆ.
ಹೌದು, ಚಕ್ರವರ್ತಿ ಚಂದ್ರಚೂಡ್ ಈಗ “ಕೇಳು ಜನಮೇಜಯ” ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಜನವರಿ26ಕ್ಕೆ ಚಿತ್ರದ. ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಬೇರ್ ಬಾಡಿ ತೋರಿಸಿರುವ ಚಕ್ರವರ್ತಿ ಚಂದ್ರಚೂಡ್, ಇಲ್ಲಿ‌ ಖೈದಿಯೋ, ಅಮಾಯಕರೋ ಎಂಬ ಪ್ರಶ್ನೆಗೆ ಕಾರಣರಾಗಿದ್ದಾರೆ.
ಇನ್ನು ಈ ಚಿತ್ರವನ್ನು ಸಂತೋಷ್‌ ಕೊಡಂಕೇರಿ ನಿರ್ದೇಶನ ಮಾಡುತ್ತಿದ್ದಾರೆ. ರಘುನಾಥ್ ಎಚ್.ಎ. ಮತ್ತು ದೃಷ್ಟಿ ಮೀಡಿಯಾ ಪ್ರೊಡಕ್ಷನ್ಸ್ ಮೂಲಕ ಈ ಚಿತ್ರ ತಯಾರಾಗುತ್ತಿದೆ. ಈ ಚಿತ್ರದ ಹಿಂದೆ ಶ್ರೀನಿ, ಧನ್ವಿಕ್ ಗೌಡ, ವಿನಾಯಕ್ ಗೌಡ, ರಘು, ಚಂದ್ರು, ಸಂತೋಷ್ ಆನಂದ್ ಮಧು ಸಾಸಿರ್ ಇದ್ದಾರೆ.


ಪೋಸ್ಟರ್ ನೋಡಿದರೆ ಇದೊಂದು ಅಪರಾಧದ ಹಿನ್ನೆಲೆಯಲ್ಲಿ ಸಾಗುವ ಚಿತ್ರ ಇರಬಹುದೇನೊ ಎಂದೆನಿಸಿದರೂ ಇಲ್ಲಿ ಹಲವು ಕುತೂಹಲಕಾರಿ ಅಂಶಗಳಿವೆ ಅನ್ನೋದು ಸತ್ಯ.
ಸದ್ಯಕ್ಕೆ ಪೋಸ್ಟರ್ ಬಿಡುಗಡೆಯಾಗಿದೆ. ಉಳಿದಂತೆ ಮತ್ತಷ್ಟು ಮಾಹಿತಿ ಜೊತೆ ಚಿತ್ರತಂಡ ಬರಲಿದೆ.

Related Posts

error: Content is protected !!