ಮದರಂಗಿ ಕೃಷ್ಣನ ಹೊಸ ಚಿತ್ರದಲ್ಲಿ ಪವರ್‌ಸ್ಟಾರ್‌!

ಪ್ರಭುದೇವ ಸಹೋದರ ನಾಗೇಂದ್ರ ಪ್ರಸಾದ್‌ ನಿರ್ದೇಶನ

“ಮದರಂಗಿ” ಕೃಷ್ಣ ಯಾವಾಗ “ಲವ್‌ ಮಾಕ್ಟೇಲ್‌” ಸಿನಿಮಾ ಮೂಲಕ ಸುದ್ದಿಯಾಗಿಬಿಟ್ಟರೋ, ಅಲ್ಲಿಂದ ಅವರ ಅದೃಷ್ಟದ ಬಾಗಿಲು ತೆರೆದಿದ್ದು ನಿಜ. ಸಾಲು ಸಾಲು ಸಿನಿಮಾಗಳಲ್ಲಿ ಮದರಂಗಿ ಕೃಷ್ಣ ನಟಿಸುತ್ತಿರೋದು ನಿಜ. ಈಗ ಹೊಸ ಸುದ್ದಿ ಅಂದರೆ, ನೃತ್ಯ ನಿರ್ದೇಶಕ ನಾಗೇಂದ್ರ ಪ್ರಸಾದ್‌ ಅವರಿಗೊಂದು ಸಿನಿಮಾ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಮದರಂಗಿ ಕೃಷ್ಣ ಹೀರೋ. ಇನ್ನು, ನಾಗೇಂದ್ರ ಪ್ರಸಾದ್‌ ಅವರು ಮಾಡುತ್ತಿರುವ ಹೊಸ ಚಿತ್ರದ ಮತ್ತೊಂದು ವಿಶೇಷ ಅಂದರೆ, ಚಿತ್ರದಲ್ಲಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು, ಸದ್ಯಕ್ಕೆ ಈ ಸುದ್ದಿ ಜೋರಾಗಿದೆ. ಅಂದಹಾಗೆ, ಕೃಷ್ಣ ನಟಿಸಿದರೋದು ಸ್ವಮೇಕ್‌ ಸಿನಿಮಾದಲ್ಲಲ್ಲ. ಬದಲಾಗಿ ತಮಿಳು ಸಿನಿಮಾದ ರಿಮೇಕ್‌ ಚಿತ್ರ. ಅದು “ಓ ಮೈ ಕಡವುಲೆ’ ಸಿನಿಮಾ. ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲು ತಯಾರಿ ನಡೆಸಲಾಗಿದೆ. ಈ ಚಿತ್ರ ರಿಮೇಕ್‌ ಆಗಿದ್ದರೂ, ಕನ್ನಡಕ್ಕೆ ಒಂದಷ್ಟು ಬದಲಾವಣೆ ಮಾಡಿಕೊಂಡು. ಕನ್ನಡದಲ್ಲಿ ತಯಾರಾಗುತ್ತಿದೆ. ಇನ್ನು, ಈ ಮೂಲ ಚಿತ್ರದಲ್ಲಿ ಅಶೋಕ್ ಸೆಲ್ವನ್ ನಾಯಕರಾಗಿದ್ದರು. ರಿತಿಕಾ ಸಿಂಗ್ ನಾಯಕಿಯಾಗಿದ್ದರು. ಅತಿಥಿ ಪಾತ್ರದಲ್ಲಿ ನಟ ವಿಜಯ್ ಸೇತುಪತಿ ನಟಿಸಿದ್ದರು.

ಈಗ ಕನ್ನಡದಲ್ಲಿ ತಯಾರಾಗಲಿರುವ ಈ ಚಿತ್ರದಲ್ಲಿ ವಿಜಯ್‌ ಸೇತುಪತಿ ನಟಿಸಿದ್ದ ಪಾತ್ರದಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ ಅವರು ನಟಿಲು ಒಪ್ಪಿದ್ದಾರೆ ಎನ್ನಲಾಗಿದೆ. ಈಗಾಗಲೇ ಪುನೀತ್ ಅವರ ಜೊತೆ  ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅವರು ನಟಿಸುವ ಬಗ್ಗೆ ಯೋಚಿಸಿದ್ದಾರೆ ಎನ್ನಲಾಗಿದೆ. ಅದೇನೆ ಇದ್ದರೂ, ಇಲ್ಲೀಗ ಸಿನಿಮಾತಂಡ ಕೂಡ ಆ ಕುರಿತಂತೆ ವಿಷಯ ಹೊರಹಾಕಬೇಕಿದೆ.  ನಾಗೇಂದ್ರ ಪ್ರಸಾದ್‌ ಅಂದಾಕ್ಷಣ, ಬಹಳಷ್ಟು ಮಂದಿಗೆ ಗೊತ್ತಿಲ್ಲ. ಅದೇ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ ಸಹೋದರ ಅಂದರೆ ಗೊತ್ತಾಗುತ್ತೆ. ಮೂಗುರು ಸುಂದರಂ ಅವರ ಮೂರನೇ ಪುತ್ರ ನಾಗೇಂದ್ರ ಪ್ರಸಾದ್‌ ಈಗಾಗಲೇ ತಮಿಳು ಸಿನಿಮಾಗಳಲ್ಲಿ ಕೆಲಸ ಮಾಡಿದ್ದು, ಅಲ್ಲೂ ಜೋರು ಸುದ್ದಿಯಾಗಿದ್ದಾರೆ. ಕನ್ನಡದಲ್ಲಿ ನಾಗೇಂದ್ರ ಪ್ರಸಾದ್ ಅವರು “೧೨೩”, “ಮನಸೆಲ್ಲಾ ನೀನೆ” ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಕನ್ನಡಕ್ಕೆ ಎಂಟ್ರಿ ಕೊಡುತ್ತಿರುವ ನಾಗೇಂದ್ರ ಪ್ರಸಾದ್ ಈಗ ಇಲ್ಲಿ ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Related Posts

error: Content is protected !!