ಹಿಂದಿ ರಾಷ್ಟ್ರ ಭಾಷೆ- ದೊಡ್ಡ ರಂಗೇಗೌಡರ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌ ವಿರೋಧ

ಅರವಿನ ಕೊರತೆಯಿಂದ ಹಾಗೆ ಹೇಳಿರಬಹುದು ಅಂತ ಕುಟುಕಿದ ನಟ 

ಹಿಂದಿ ಭಾಷೆ ಕುರಿತು ಸಾಹಿತಿ ಹಾಗೂ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ. ದೊಡ್ಡ ರಂಗೇ ಗೌಡರು ನೀಡಿರುವ ಹೇಳಿಕೆ ಭಾರೀ ವಿವಾದ ಹುಟ್ಟು ಹಾಕಿದೆ. ಸೋಷಲ್‌ ಮೀಡಿಯಾದಲ್ಲಿ ಅವರ ಹೇಳಿಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಕಷ್ಟು ಜನ ರಂಗೇಗೌಡರನ್ನು ಕಟುವಾದ ಮಾತುಗಳಿಂದ ಟೀಕಿಸಿದ್ದಾರೆ. ಈ ನಡುವೆಯೇ ನಟ ನಿಖಿಲ್‌ ಕುಮಾರ್‌ ಕೂಡ ರಂಗೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಬಹುಶ: ಇದು ಅವರ ಅರಿವಿನ ಕೊರತೆಯಾಗಿರಬಹುದು ಎಂದು ಹೇಳಿದ್ದಾರೆ.
” ಇಂಗ್ಲಿಷ್‌ ಗೆ ನಾವು ಮಣೆ ಹಾಕುತ್ತೇವೆ. ಹಿಂದಿಯನ್ನು ಏಕೆ ತಿರಸ್ಕಾರ ಮಾಡಬೇಕು, ಹಿಂದಿ ನಮ್ಮ ರಾಷ್ಟ್ರ ಭಾಷೆ ” ಎಂಬುದಾಗಿ ರಂಗೇಗೌಡರ ನೀಡಿರುವ ಹೇಳಿಕೆಗೆ ನಟ ನಿಖಿಲ್‌ ಕುಮಾರ್‌, ಸೋಷಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದಾರೆ. ” ಹಿಂದಿ ನಮ್ಮ ರಾಷ್ಟ್ರ ಭಾಷೆ , ಕನ್ನಡಿಗರಾದ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂಬ ದೊಡ್ಡ ರಂಗೇಗೌಡರ ಮಾತು ಕೇಳಿ ಅಚ್ಚರಿಯಾಯಿತು. ಬಹುಶ: ಇದು ಅವರ ಅರವಿನಿ ಕೊರತೆಯಿಂದ ಆಗಿದೆʼ ಎಂದು ನಿಖಿಲ್‌ ಕುಟುಕಿದ್ದಾರೆ.ʼ

“ನಮ್ಮ ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂಬ ವಿಚಾರವನ್ನು ಕಲಿಸುವ ಅವಶ್ಯಕತೆ ಇದೆ. ಇಲ್ಲದಿದ್ದರೆ, ಮುಂದಿನ ಪೀಳಿಗೆಯೂ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ರೀತಿ ಹಿಂದಿ ರಾಷ್ಟ್ರೀಯ ಭಾಷೆ ಎಂದು ತಪ್ಪಾಗಿ ಭಾವಿಸಿಕೊಳ್ಳುವ ಸಾಧ್ಯತೆ ಇದೆʼ ಎಂಬುದಾಗಿ ನಟ ನಿಖಿಲ್‌ ಕುಮಾರ್‌ ಇದೇ ವೇಳೆ ಆತಂಕ ಹೊರ ಹಾಕಿದ್ದಾರೆ.

Related Posts

error: Content is protected !!