ಸಿನಿಮಾ ನಿರ್ಮಾಣಕ್ಕೆ ಬಂದ ಮೈಲಾರಿ ಗ್ರೂಪ್, ಶೀಘ್ರವೇ ಹೊಸ ಸಿನಿಮಾ ಆರಂಭ ಎನ್ನುತ್ತಾರೆ ನಿರ್ಮಾಪಕ ಮಹೇಶ್

ಕನ್ಮಡದ ಸಿನಿಮಾ ಪ್ರೇಕ್ಷಕರ ಮುಂದೆ ಮತ್ತೊಂದು ಬಿಗ್ ಬಜೆಟ್ ಸಿನಿಮಾ‌ !

ಹಾಸನ ಮೂಲದ ಮೈಲಾರಿ ಗ್ರೂಪ್ ಆಫ್ ಸಂಸ್ಥೆ ಚಿತ್ರ ನಿರ್ಮಾಣಕ್ಕೆ‌ ಮುಂದಾಗಿದೆ. ಸಂಸ್ಥೆಯ ಮಾಲೀಕರಾದ ಮೈಲಾರಿ ಮಹೇಶ್ ಸಿನಿಮಾ ನಿರ್ಮಾಣಕ್ಕೆ ವಿಶೇಷ ಆಸಕ್ತಿ ತೋರಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾದ ಚಿತ್ರೀಕರಣ ಆರಂಭವಾಗುವುದಾಗಿ ಅನೌನ್ಸ್ ಮಾಡಿದ್ದಾರೆ. ಕನ್ನಡ ಚಿತ್ರ ರಂಗಕ್ಕೆ ಇದು ಮೈಲಾರಿ ಗ್ರೂಪ್ ಆಫ್ ಸಂಸ್ಥೆಯ ಮೊದಲ ಕೊಡುಗೆ.

ನಿರ್ಮಾಪಕ‌ ಮಹೇಶ್ ಹಾಗೂ ನಿರ್ದೇಶಕ ರಾಜ್ ಚೈತನ್ಯ

ಕನ್ನಡದ ಹೆಸರಾಂತ ನಿರ್ದೇಶಕ, ಕಲಾ ಸಾಮ್ರಾಟ್ ಎಸ್.ನಾರಾಯಣ್ ಬಳಿ ಕೆಲಸ ಯುವ ನಿರ್ದೇಶಕ ರಾಜ ಚೈತನ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿ ದ್ದಾರೆ.ಈಗಾಗಲೇ ಅವರು, ‘ಅಮೃತ ವರ್ಷಿಣಿ’, ‘ಕೃಷ್ಣ ರುಕ್ಕು’, ‘ಲಕ್ಷ್ಮೀ ಬಾರಮ್ಮ’, ‘ಜೊತೆಜೊತೆಯಲಿ’ ಧಾರಾವಾಗಳಿಗೆ ಸಹ ನಿರ್ದೇಶನ ಮಾಡಿರುವ ಅನುಭವಿ.ಆ ಮೂಲಕವೇ ಈಗ ತಾವೇ ಕಥೆ, ಚಿತ್ರಕಥೆ ಬರೆದು, ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ‌ ಗುರುರಾಜ್ ಎಂ ದೇಸಾಯಿ ಸಂಭಾಷಣೆ ಬರೆಯುತ್ತಿದ್ದಾರೆ. ಸದ್ಯಕ್ಕೆ ಚಿತ್ರದ ತಾರಾಗಣದ ವಿವರ ಲಭ್ಯವಾಗಿಲ್ಲ. ಆದರೆ ಚಿತ್ರ ತಂಡ ಅನುಭವಿ ತಂತ್ರಜ್ಞರನ್ನೇ ಆಯ್ಕೆ ಮಾಡಿಕೊಂಡಿದೆ.

ಜಯಂತ್ ಕಾಯ್ಕಿಣಿ

ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ರಾಜ ಚೈತನ್ಯ ಹಾಡುಗಳನ್ನು ಬರೆಯುತ್ತಿದ್ದು, ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರಂತೆ. ಹಾಗೆಯೇ, ಜಾನಿ, ಮುರಳಿ, ಚಿನ್ನಿಪ್ರಕಾಶ್, ಇಮ್ರಾನ್ ಸರ್ದಾರಿಯ ನೃತ್ಯ ನಿರ್ದೇಶನ, ರವಿವರ್ಮ, ವಿನೋದ್ ಹಾಗೂ ವಿಕ್ರಂ ಮೋರ್ (ಕೆ ಜಿ ಎಫ್) ಅವರ ಸಾಹಸ ‌ನಿರ್ದೇಶನ ಈ ಚಿತ್ರಕ್ಕಿದೆ.‌ಮಹೇಶ್ ತಲಕಾಡು ಛಾಯಾಗ್ರಾಹಕರಾಗಿ, ಜೋನಿ ಹರ್ಷ ಸಂಕಲನಕಾ ರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂತಹದೊಂದು ದೊಡ್ಡ ತಂಡವನ್ನೇ ಸೃಷ್ಟಿಸಿಕೊಂಡಿರುವ ಮೈಲಾರಿ‌ಗ್ರೂಪ್
ಬಿಗ್ ಬಜೆಟ್ ಸಿನಿಮಾ ಮಾಡುವುದು ಗ್ಯಾರಂಟಿ ಆಗಿದೆ. ಹಾಗೆಯೇ ದೊಡ್ಡ ಸ್ಟಾರ್ ಈ‌ಸಿನಿಮಾದಲ್ಲಿರುವುದು ಕೂಡ ಗ್ಯಾರಂಟಿಯಂತೆ.ಅದೆಲ್ಲವೂ ಮುಂದೆ ರಿವೀಲ್ ಆಗಲಿದೆಯಂತೆ.

ಅರ್ಜುನ್ ಜನ್ಯಾ

Related Posts

error: Content is protected !!