ಲಂಕೆಯಲ್ಲಿ ಗೂಂಡಾಗಿರಿ, ಯೋಗಿ ಅವರದೇ‌ ಅಲ್ಲಿ ದಾದಾಗಿರಿ, ಇದು ಆಧುನಿಕ ರಾಮಾಯಣದ ಲಂಕೆಯಂತೆ…!

ಟೈಟಲ್ ಲಾಂಚ್ ನಲ್ಲಿ ನೋಡುಗರಿಗೆ ಭರ್ಜರಿ ಕಿರಿ ಕಿರಿ…..

ಲಂಕೆಯಲ್ಲಿ ರೌಡಿಸಂ ಅಂತೆ, ಅದು ಹೇಗೆ ? ರಾಮಾಯಣ ಬಲ್ಲವರಿಗೆ ಇದು ಅಚ್ಚರಿ. ಯಾಕಂದ್ರೆ ಅಲ್ಲಿ ಆಗಿದ್ದು ರಾಮ- ರಾವಣರ ಯುದ್ದ. ಬದಲಿಗೆ ಅಲ್ಲೂ ರೌಡಿಸಂ ಇತ್ತು ಅನ್ನೋದನ್ನು ಯಾರು ಕೇಳಿ ತಿಳಿದಿಲ್ಲ. ಆದ್ರೆ, ಇಲ್ಲಿ ಸೃಷ್ಟಿಸಿರುವವರ ‘ಲಂಕೆ’ಯಲ್ಲಿ ರೌಡಿಸಂ ಇದೆ. ಇಲ್ಲಿ ನಟ‌ ಲೂಸ್ ಮಾದ ಯೋಗೇಶ್ ಅವರದೇ ಗೂಂಡಾಗಿರಿ.ಯಾಕಂದ್ರೆ ಅವರೇ ಈ ‘ಲಂಕೆ’ ಯ‌ ರೌಡಿ !ಇ

ದು ಆಧುನಿಕ ರಾಮಾಯಣದ ಲಂಕೆ. ದಿ ಗ್ರೇಟ್ ಎಂಟರ್ಟೈನರ್ಸ್ ಲಾಂಛನದಲ್ಲಿ ಸಿದ್ಧವಾದ ಚಿತ್ರ . ರಾಮ್ ಪ್ರಸಾದ್ ಈ ಚಿತ್ರದ ನಿರ್ದೇಶಕರು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ ಈ ಚಿತ್ರ ಬಿಡುಗಡೆ ಆಗಿರತಿತ್ತು. ಕೊರೋನಾ ಕಾರಣ ಇದೀಗ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ರಿಲೀಸ್ ಸಿದ್ಧತೆಯಲ್ಲಿರುವ ಚಿತ್ರ ತಂಡ, ಈಗ ಟೈಟಲ್ ಲಾಂಚ್ ಮಾಡಿಕೊಂಡು, ಪ್ರಚಾರಕ್ಕೆ ಚಾಲನೆ ಕೊಟ್ಟಿದೆ.

ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಚಿತ್ರ ತಂಡ ಭರ್ಜರಿಯಾಗಿಯೇ ಸಿದ್ಧತೆ ಮಾಡಿಕೊಂಡಿತ್ತು. ಆದರೆ ಸರಿಯಾದ ವ್ಯವಸ್ಥೆ ಇಲ್ಲದೆ ಕೊಂಚ ಸಭಿಕರಿಗೆ ಕಿರಿ ಕಿರಿ ಉಂಟಾಯಿತು. ಕೊನೆಗೂ ಕಾರ್ಯಕ್ರಮ ಶುರುವಾಯಿತು.

ಮೊದಲಿಗೆ ಮಾತನಾಡಿದ ನಿರ್ದೇಶಕ ರಾಮ‌್ ಪ್ರಸಾದ್, ಕಥೆ ಬರೆಯುತ್ತಿದ್ದಂತೆ ರಾಮಾಯಣದ ತಿರುಳಿರುವ ಹಿನ್ನೆಲೆಯಲ್ಲಿ ಲಂಕೆ ಎಂದೇ ಶೀರ್ಷಿಕೆ ಫಿಕ್ಸ್ ಆಯ್ತು. ‌ಚಿತ್ರೀಕರಣ ಶುರುವಾಗಿ , ಇದೀಗ ಸಿನಿಮಾ ಚಿತ್ರ ಬಿಡುಗಡೆ ಹಂತದಲ್ಲಿದೆ ಎಂದರು ನಿರ್ದೇಶಕರು. ಚಿತ್ರದ ನಾಯಕಿಯರಾದ ಕೃಷಿ ತಾಪಂಡ ಹಾಗೂ ಕಾವ್ಯಾ ಶೆಟ್ಟಿ ತಮ್ಮ ಪಾತ್ರಗಳ ಬಗ್ಗೆ ಹೇಳಿಕೊಂಡರು.

ನಟ ಸಂಚಾರಿ ವಿಜಯ್ ಈ‌ ಚಿತ್ರದ‌ಮತ್ತೋರ್ವ ಪ್ರಮುಖ ಪಾತ್ರಧಾರಿ.’ ನನ್ನ ಮತ್ತು ಯೋಗಿ ಅವರ ಮೊದಲ ಸಿನಿಮಾ ಇದು. ಇಬ್ಬರಿಗೂ ಕಾಂಬಿನೇಷನ್ ಇಲ್ಲ. ಫ್ಲ್ಯಾಶ್ಬ್ಯಾಕ್ನಲ್ಲಿ ನಡೆಯುವ ಕಥೆಯಲ್ಲಿ ಎಸ್ತರ್ ನರೋನಾ ನನಗೆ ಜೋಡಿಯಾಗಿದ್ದಾರೆ. ಮಂಡ್ಯದಲ್ಲಿ ನಡೆದ ನೈ ಘಟನೆಯನ್ನೇ ವಿಶೇಷವಾಗಿ ತೋರಿಸಿದ್ದಾರೆ ನಿರ್ದೇಶಕರು ಎಂದರು ನಟ ವಿಜಯ್.

ಹೆಚ್ಚೇನೂ ಮಾತನಾಡದ ಲೂಸ್ ಮಾದ ಯೋಗಿ,ರೌಡಿಸಂ ಹಿನ್ನೆಲೆಯ ಕಥೆ. ಸಂಚಾರಿ ವಿಜಯ ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ ಎಂದರು. ನಿರ್ಮಾಪಕರಾದ ಪಟೇಲ್ ಶ್ರೀನಿವಾಸ್, ಶ್ರೀಮತಿ ಸುರೇಖಾ ರಾಮ್ ಪ್ರಸಾದ್ ಮಾತನಾಡಿ, ಒಂದೊಳ್ಳೆಯ ಸಿನಿಮಾ‌ಮಾಡಿದ‌ ಅನುಭವ ಹೇಳಿಕೊಂಡರು. ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಚಿತ್ರಮಂದಿರಕ್ಕೆ ಬರಲಿದ್ದೇವೆ ಎಂದರು. ಇದೇ ವೇಳೆ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ, ಜನ್ಮದಿನದ ನಿಮಿತ್ತ ಶೀರ್ಷಿಕೆ ಅನಾವರಣ ಕಾರ್ಯಕ್ರಮದಲ್ಲಿಯೇ ಕೇಕ್ ಕತ್ತರಿಸಿ ಸಂಭ್ರಮಿಸಿತು ಚಿತ್ರತಂಡ.

Related Posts

error: Content is protected !!