ಹೊಸ ವರ್ಷಕ್ಕೆ ಹೊಸ ಥರ : ಮೂರು ಸಿನಿಮಾ ಜತೆಗೆ ಮದುವೆ ಆಗುವ ಯೋಚನೆ ಕೂಡ ಇದೆ ಅಂದ್ರು ಮನುರಂಜನ್ !

ಬದಲಾದ ಸನ್ನಿವೇಶಗಳೊಂದಿಗೆ ಶುರುವಾಗಲಿದೆ “ಮುಗಿಲ್ ಪೇಟೆ’ ಪಯಣ

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನುರಂಜನ್ ಹೊಸ ವರ್ಷ 2021 ಕ್ಕೆ ಹೊಸ ತೆರೆನಾಗಿಯೇ ತೆರೆಬರಲು ಸಜ್ಜಾಗುತ್ತಿದ್ದಾರೆ. ಸದ್ಯಕ್ಕೆ ಅವರು ಅಭಿನಯಿಸಿರುವ ” ಪ್ರಾರಂಭ’ ಚಿತ್ರ ರಿಲೀಸ್ ಗೆ ರೆಡಿಯಿದೆ. ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ಅದು ತೆರೆ ಕಂಡು ಇಲ್ಲಿಗೆ ಹೆಚ್ಚು ಕಡಿಮೆ ವರ್ಷವೇ ಅಗಲಿತ್ತು. ಕಳೆದ ವರ್ಷ ಮಾರ್ಚ್ 27ಕ್ಕೆ ಅದರ ರಿಲೀಸ್ ಡೇಟ್ ಫಿಕ್ಸ್ ಆಗಿತ್ತು. ಆದರೆ ಆ ಹೊತ್ತಿಗೆ ಕೊರೋನಾ ಬಂತು, ಚಿತ್ರ ಮಂದಿರಗಳು ಲಾಕ್ ಡೌನ್ ಅಡಿ ಸಿಲುಕಿ ಬಂದ್ ಆದವು. ಅಲ್ಲಿಂದ ಇಲ್ಲಿವರೆಗೂ ಏನಾಯ್ತು ಅನ್ನೋದು ನಿಮಗೆಲ್ಲ ಗೊತ್ತಿರುವ ವಿಚಾರ. ಇದೀಗ ಚಿತ್ರ ರಿಲೀಸ್ ಗೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಅದರ ನಾಯಕ ನಟ ಮನು ರಂಜನ್ ನೀಡುವ ಮಾಹಿತಿ ಪ್ರಕಾರ ಫೆಬ್ರವರಿ ಕೊನೆ ಅಥವಾ ಮಾರ್ಚ್ ತಿಂಗಳಲ್ಲಿ ಅದು ತೆರೆಗೆ ಬರಲಿದೆಯಂತೆ.


ಇನ್ನು ಮನು ರಂಜನ್ ನಾಯಕ ನಟಯಾಗಿ ಅಭಿನಯಿಸಿರುವ ಮತ್ತೊಂದು ಚಿತ್ರ ” ಮುಗಿಲ್ ಪೇಟೆ’. ಇದು ಭರತ್ ನಾವುಂದ ನಿರ್ದೇಶನದ ಚಿತ್ರ. ಇದರ ಕಡೆ ಈಗ ಅವರು ಹೆಚ್ಚು ಗಮನ ಹರಿಸಿದ್ದಾರಂತೆ. ಸದ್ಯಕ್ಕೆ ಅದಕ್ಕೀಗ ಶೇಕಡಾ 60 ಭಾಗದ ಚಿತ್ರೀಕರಣ ಮುಗಿದಿದೆ. ಇನ್ನೇನು 40 ಭಾಗದ ಚಿತ್ರೀಕರಣ ಬಾಕಿಯಿದೆ. ಅದಕ್ಕೆ ಫೆಬ್ರವರಿ 3 ರಿಂದ ಚಿತ್ರೀಕರಣ ಶುರುವಾಗಕಿದೆಯಂತೆ. ಆದರೆ ಈ ಚಿತ್ರದ ಚಿತ್ರಕತೆಯಲ್ಲೀಗ ಸಾಕಷ್ಟು ಬದಲಾವಣೆ ಆಗಿದೆಯಂತೆ. ಸ್ವತಹ ರವಿಚಂದ್ರನ್ ಅವರೇ ಒಂದಷ್ಟು ಸಲಹೆ ಕೊಟ್ಟಿದ್ದಾರಂತೆ. ಮನುರಂಜನ್ ಸಿನಿ ಜರ್ನಿಯಲ್ಲಿ ಇದುವರೆಗೂ ಆದ ಮಿಸ್ಟೇಕ್ಸ್ ಇನ್ನು ಮುಂದೆ ಆಗಬಾರದು ಅಂತ ಸಿನಿಮಾದಲ್ಲಿ ಒಂದಷ್ಟು ಮಾಸ್ ಮತ್ತು ಸೆಂಟಿಮೆಂಟ್ ಅಂಶಗಳು ಜಾಸ್ತಿ ಇರಲಿ ಅಂತಲೇ ರವಿಚಂದ್ರನ್ ಅವರು ʼಮುಗಿಲ್ ಪೇಟೆʼ ಚಿತ್ರದ ಟೀಮ್ ಗೆ ಸಲಹೆ ನೀಡಿದ್ದಾರಂತೆ. ಅದಕ್ಕೆ ಪೂರಕವಾಗಿಯೇ ಚಿತ್ರ ತಂಡ ಸ್ಕ್ರಿಫ್ಟ್ ನಲ್ಲಿ ಒಂದಷ್ಟು ಚೇಂಜಸ್ ಮಾಡಿಕೊಂಡು ಬಾಕಿ ಉಳಿದ ಚಿತ್ರೀಕರಣ ಶುರು ಮಾಡಲಿದೆಯಂತೆ.


ಮುಗಿಲ್ ಪೇಟೆ ಚಿತ್ರದ ಮೇಲೆ ಮನು ರಂಜನ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ನನ್ನ ಫೆವರೆಟ್ ಮೂವೀ ಅಂತಲೇ ಮಾತಿಗಿಳಿಯುತ್ತಾರೆ. ” ನಾನು ಮಾಡುವ ಎಲ್ಲಾ ಸಿನಿಮಾಗಳು ನಂಗಿಷ್ಟ. ಆದರೆ ಮುಗಿಲ್ ಪೇಟೆ ನಂಗೆ ಒಂದಷ್ಟು ಸ್ಪೆಷಲ್. ನನಗಾಗಿ ನನ್ನ ಗೆಳೆಯ ನಿರ್ಮಾಣ ಮಾಡುತ್ತಿರುವ ಚಿತ್ರ. ಹಾಗೆಯೇ ಚಿತ್ರದ ಕತೆ. ಅಪ್ಪ ಇದೇ ಮೊದಲು ಅದರ ಪೂರ್ಣ ಕತೆ ಕೇಳಿ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಇನ್ನು ನಾನು ಗೆಲ್ಲಲೇ ಬೇಕಿದೆ. ಪ್ರೇಕ್ಷಕರಿಗೆ ಇಷ್ಟವಾಗುವಂತಹ ಚಿತ್ರ ಕೊಡಲೇಬೇಕಿದೆ. ಆನಿಟ್ಟಿನಲ್ಲಿ ಅದನ್ನು ಒಂದಷ್ಟು ಚೇಂಜಸ್ ಮೂಲಕ ಚಿತ್ರೀಕರಿಸುತ್ತಿದ್ದೇವೆ’ ಎನ್ನುತ್ತಾರೆ ಮನುರಂಜನ್.


‘‍ಮುಗಿಲ್ ಪೇಟೆ’ ಜತೆಗೆ ‘ಚಿಲ್ಲಂ’ ಹೆಸರಿನ ಚಿತ್ರವೊಂದಕ್ಕೂ ಮನು ರಂಜನ್ ನಾಯಕರಾಗಿದ್ದಾರೆ. ಆ ಚಿತ್ರ ಐದಾರು ದಿನ ಚಿತ್ರೀಕರಣ ಮುಗಿಸಿ, ಅರ್ಧಕ್ಕೆ ನಿಂತಿದೆ. ಅದಕ್ಕೂ ಕೂಡ ಇಷ್ಟರಲ್ಲಿಯೇ ಚಾಲನೆ ಸಿಗಲಿದೆಯಂತೆ. ಈ ಚಿತ್ರದಲ್ಲಿ ಮನು ರಂಜನ್ ಅವರದ್ದು ವಿಲನ್ ಕ್ಯಾರೆಕ್ಟರ್. ಅದರ ಫಸ್ಟ್ ಲುಕ್ ಸಾಕಷ್ಟು ಸದ್ದು ಮಾಡಿದ್ದೂ ನಿಮಗೂ ಗೊತ್ತು. ಇದರ ಜತೆಗೆ ಮತ್ತೊಂದು ಕತೆ ಕೇಳಿದ್ದಾರಂತೆ. ದುನಿಯಾ ಸೂರಿ ಅವರ ಜತೆಗೂ ಒಂದು ಸಿನಿಮಾದ ಮಾತುಕತೆ ನಡೆದಿದೆಯಂತೆ. ಸದ್ಯಕ್ಕೆ ಅದು ಫೈನಲ್ ಆಗಿಲ್ಲ ಅಂತ ಮನುರಂಜನ್ ಹೇಳುತ್ತಾರದರೂ, ಅದು ಚಿತ್ರ ಮಂದಿರಕ್ಕೋ, ಒಟಿಟಿ ಪ್ಲಾಟ್ ಫಾರ್ಮ್ ಗೋ ಅನ್ನೋದು ಡಿಸೈಡ್ ಆದರೆ ಇಷ್ಟರಲ್ಲೇ ಅದು ಕೂಡ ಶರುವಾಗಲಿದೆಯಂತೆ. ಇದರ ಜತೆಗೆ ರವಿಚಂದ್ರನ್, ವಿಕ್ರಮ್ ಹಾಗೂ ತಾವು ಸೇರಿ ಒಂದು ಸಿನಿಮಾ ಮಾಡುವ ಸಾಧ್ಯತೆಗಳು ಇವೆ ಅಂತಾರೆ ಮನು ರಂಜನ್. ಅಲ್ಲಿಗೆ ನಟನಾಗಿ 2021 ಕ್ಕೆ ಪೂರ್ಣ ಪ್ರಮಾಣದಲ್ಲಿ ಬ್ಯುಸಿ ಆಗಿರಲು ನಿರ್ಧರಿಸಿರುವ ಮನು ರಂಜನ್, ಇದೇ ವರ್ಷವೇ ಮದುವೆ ಕೂಡ ಆಗಲಿದ್ದಾರಂತೆ. ಅದು ಕೂಡ ಅಪ್ಪ- ಅಮ್ಮ ತೋರಿಸಿದ ಹುಡುಗಿಯನ್ನೇ ತಾವು ಮದುವೆ ಆಗೋದು ಅಂತಾರೆ. ಇದಿಷ್ಟು ಮಾಹಿತಿಯನ್ನು ಅವರು ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡರು.

Related Posts

error: Content is protected !!