ರೈತರು ನಿಜವಾದ ವೀರರು-ರೈತರ ದಿನಕ್ಕೆ ಶುಭ ಕೋರಿದ  ಸ್ಟಾರ್ಸ್‌

ರೈತರ ಉತ್ಪನ್ನಗಳಿಗೆ ಬೆಲೆ ಸಿಕ್ಕಾಗಲೆ ರೈತ ದಿನಕ್ಕೆ ನಿಜ ಅರ್ಥ, ಶುಭಾಶಯ ಕೋರುವ ಸಂದರ್ಭದಲ್ಲೆ ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ನಟರು

 

ಇಂದು ರಾಷ್ಟ್ರೀಯ ರೈತ ದಿನಾಚರಣೆ. ನಿರಂತರ ದುಡಿಮೆಯಲ್ಲಿ ತೊಡಗುವ ನಾಡಿನ ಸಮಸ್ತ ರೈತರಿಗೆ ಕನ್ನಡ ಹಲವು ನಟರು ಶುಭಾಶಯ ಕೋರಿದ್ದಾರೆ. ರೈತರು ನಿಜವಾದ ವೀರರಾಗಿದ್ದಾರೆ. ಯಾಕೆಂದರೆ, ಅವರ ಸಮರ್ಪಣೆ ಮತ್ತು ಶ್ರಮದಿಂದ. ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ, ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ ಅಂತ ನಟ ದರ್ಶನ್‌ ಟ್ವಿಟ್‌ ಮಾಡಿದ್ದಾರೆ.

ಹಾಗೆಯೇ ನಟ ನಿಖಿಲ್‌ ಕುಮಾರ್‌ ಕೂಡ ರೈತರ ದಿನಕ್ಕೆ ಶುಭಾಶಯ ಕೋರಿದ್ದಾರೆ.
ʼ ದೇಶದ ಬೆನ್ನೆಲುಬು ರೈತ. ಎಲ್ಲರಿಗೂ ಅನ್ನದಾತರಾಗಿರುವ ಸಮಸ್ತ ರೈತ ಕುಲಕ್ಕೆ ರೈತ ದಿನದ ಶುಭಾಶಯ. ಬೆವರು ಸುರಿಸಿ ಬೆಳೆ ಬೆಳೆಯುವ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಹಾಗೂ ಗೌರವ ದೊರಕುವಂತಹ ದಿನಗಳು ಬಂದಾಗಲೇ ರೈತ ದಿನಾಚರಣೆ ಸಾರ್ಥಕʼ ಎಂದು ನಿಜವಾದ ಅರ್ಥʼ ಎಂಬುದಾಗಿ ನಿಖಿಲ್‌ ಟ್ವಿಟ್‌ ಮಾಡಿದ್ದಾರೆ.

ನಟ ರೋರಿಂಗ್‌ ಸ್ಟಾರ್‌ ಶ್ರೀ ಮುರಳಿ ಕೂಡ ರೈತರ ದಿನಕ್ಕೆ ಶುಭ ಕೋರಿದ್ದಾರೆ. ರೈತ ದೇಶದ ಬೆನ್ನೆಲುಬು, ರೈತ ದುಡಿದರೆ ಅನ್ನ, ನಾಡಿಗೆ ಅನ್ನ ನೀಡುವ ರೈತರ ಎಲ್ಲಾ ಸಂಕಷ್ಟಗಳು ಮುಂದಿನ ದಿನಗಳಲ್ಲಾದರೂ ಬಗೆ ಹರೆದು, ಸಂತಸ ಕಾಣಲಿ” ಎಂದು ಅವರು ಟ್ವಿಟ್‌ ಮಾಡಿದ್ದಾರೆ.

Related Posts

error: Content is protected !!