ಅಲೆಯಾಗಿ ಬಂದ ಹುಡುಗನ ಅಲೆ‌‌ ಅಲೆಯ ಮಾತು!

ಆ್ಯಕ್ಟರ್ ಆಗಲು ಗಾಂಧಿನಗರಕ್ಕೆ ಬಂದ ಡಾಕ್ಟರ್

ಪುನೀತ್ ರಾಜ್ ಕುಮಾರ್ ಜತೆಗೆ ರಥ ಕಿರಣ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಈಗಾಗಲೇ ಚಿತ್ರ ನಿರ್ಮಾಣದ ಜತೆಗೆ ಕನ್ನಡ ಅನೇಕ ಸಿನಿಮಾಗಳ ಆಡಿಯೋ ಹೊರ ತಂದಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಆದರೆ ಇದೇ ಮೊದಲ ಬಾರಿಗೆ ಪಿಆರ್ ಕೆ ಸಂಸ್ಥೆ‌ ಒಂದು ವಿಡಿಯೋ ಸಾಂಗ್ ಆಲ್ಬಂವೊಂದನ್ನು ಲಾಂಚ್ ಮಾಡುವ ಮೂಲಕ‌ ಸೋಷಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

 

‘ಅಲೆಯಾಗಿ ಬಾ ‘ ಎನ್ನುವುದು ಆ ವಿಡಿಯೋ ಸಾಂಗ್ ಆಲ್ಬಂ ಹೆಸರು. ಅದರಲ್ಲಿರುವುದು ಒಂದೇ ಒಂದು ಸಾಂಗ್.‌ಅದೀಗ ಸೋಷಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಆಗಿದೆ. ಅದಕ್ಕೆ , ಪಿಆರ್ ಕೆ ಸಂಸ್ಥೆ ಎನ್ನುವುದು ಹೇಗೆ ಕಾರಣವೋ,ಹಾಗೆಯೇ ಆ ಸಾಂಗ್ ಗುಣಮಟ್ಟವೂ ಅದಕ್ಕೆ ಅಷ್ಟೇ ಕಾರಣ. ಹಾಡಿನ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿಯವರದ್ದು, ರಾಜೇಶ್ ಕೃಷ್ಣನ್ ಮತ್ತು ಆಶಾ ಭಟ್ ಇದರ ಗಾಯಕರು. ಬಿ.ಜೆ.‌ಭರತ್ ಸಂಗೀತ ನೀಡಿದ್ದಾರೆ. ಈ‌ಆಲ್ಬಂ ಥೀಮ್ ಡಾ. ಸಹನಾ ಸುಧಾಕರ್ ಅವರದ್ದು. ಆ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ ‘ಅಲೆಯಾಗಿ ಬಾ’ ಹಾಡು.

ಕೇಳುಗನ ಮನಸ್ಸಿಗೆ ಹಿತ ಕೊಡುವ ಆ ಹಾಡಿನ ಸಾಹಿತ್ಯ, ಕಣ್ಣಿಗೆ ಮುದ‌ ನೀಡುವ ಅದರ ಚಿತ್ರೀಕರಣ, ಹಾಗೆಯೇ ಕೇಳುವುದಕ್ಕೂ ಖುಷಿ ನೀಡುವ ಅದರ ಸಂಗೀತವೂ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ. ಅದು ಪಿಆರ್ ಕೆ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಹೊರ ಬಂದ ಮೂರು ದಿನದಲ್ಲಿ ಎರಡೂವರೆ ಲಕ್ಷ ವಿವ್ಯೂಸ್ ಪಡೆದಿದೆ.

ಕುಂದಾಪುರದ ಸುಂದರ ನಿಸರ್ಗದ ಮಧ್ಯೆ ಅಷ್ಟೇ ಸೊಗಸಾಗಿ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಸವರುತ್ತಿದೆ. ಅದೇ ಕಾರಣಕ್ಕೆ ಸೋಷಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಅದೇ ವೇಳೆ ಈ ಹಾಡಿನ ಕ್ವಾಲಿಟಿಗೂ ಅಪಾರ ಮೆಚ್ಚುಗೆ ಸೂಚಿಸುತ್ತಿರುವ ಜನರ ಕಣ್ಣು ಈಗ, ಈವಿಡಿಯೋ ಆಲ್ಬಂ ರೂವಾರಿಯ ಮೇಲೂ ಬಿದ್ದಿದೆ.

ಅಂದ ಹಾಗೆ, ಈ ಆಲ್ಬಂ ಸಾಂಗ್ ನ ರೂವಾರಿ ರಥ ಕಿರಣ್. ಇವರ ಮೂಲ‌ ಹೆಸರು ಕಿರಣ್. ಆನ್ ಸ್ಕ್ರೀನ್ ಪರಿಚಯಕ್ಕೆ ರಥ ಕಿರಣ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಹುಟ್ಟಿದ್ದು ಮೈಸೂರು, ಬೆಳೆದಿದ್ದು ವೃತ್ತಿಯಲ್ಲಿ ವೈದ್ಯರು. ಜೆಎಸ್ಎಸ್ ನಲ್ಲಿ ಮೆಡಿಕಲ್ ಶಿಕ್ಷಣ ಮುಗಿಸಿ, ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈಗ ವೈದ್ಯ ವೃತ್ತಿಗೆ ಒಂದಷ್ಟು ವಿಶ್ರಾಂತಿ ಕೊಟ್ಟು, ಸಿನಿಮಾ ನಟನಾಗುವ ಮಹತ್ತರ ಆಸೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅದರ ಮೊದಲ ಪ್ರಯತ್ನವೇ ‘ಅಲೆಯಾಗಿ ಬಾ’.

ಸಿನಿಮಾ ನನ್ನ‌ ಕನಸು, ಉಸಿರು‌. ಮೆಡಿಕಲ್ ಓದಿದರೂ ನನಗೆ ಸಿನಿಮಾ ನಟ ಆಗ್ಬೇಕು ಎನ್ನುವ ಆಸೆಗೆ ಕಾರಣ ಡಾ. ರಾಜ್ ಕುಮಾರ್. ಹಾಗೆಯೇ ಪುನೀತ್ ರಾಜ್ ಕುಮಾರ್ ನನ್ನ ನೆಚ್ಚಿನ ನಟ. ಅವರ ಪ್ರಭಾವದಿಂದಲೇ ನನಗೆ ಸಿನಿಮಾ ಹುಚ್ವು ಹತ್ತಿಸಿಕೊಂಡೆ‌. ಈಗ ನನಗೆ ಅದೇ ಮೈನ್ ಟಾರ್ಗೆಟ್. ಹಾಗಾಗಿಯೇ ನಾನು ಗಾಂಧಿನಗರಕ್ಕೆ ಬಂದೆ. ನನ್ನನು ನಾನು ತೋರಿಸಿಕೊಳ್ಳುವ ಮೊದಲ ಪ್ರಯತ್ನವಾಗಿ ಈ ವಿಡಿಯೋ ಸಾಂಗ್ ಆಲ್ಬಂ ಹೊರ ತಂದಿದ್ದೇನೆ’

– ರಥ ಕಿರಣ್, ಯುವ ನಟ

ಅವರೇ ಹೇಳುವ ಹಾಗೆ ರಥ ಕಿರಣ್ ನಟನಾಗಲು ಗಾಂಧಿನಗರಕ್ಕೆ ಬಂದವರು. ಬಂದ ಹೊಸತರಲ್ಲಿಯೇ ಅವರಿಗೆ ನಿರ್ದೇಶಕ‌ ಸಿಂಪಲ್ ಸುನಿ ಬೆಂಬಲ‌ಸಿಕ್ಕಿದೆ. ಈ ಹಾಡು ಬರುವುದಕ್ಕೆ ಸುನಿ ಅವರೇ ಕಾರಣವಂತೆ. ರಥ ಕಿರಣ್ ಗಾಂಧಿನಗರಕ್ಕೆ ಬಂದ ಹೊಸಬರಾದರೂ, ಅಭಿನಯದ ತಿಳಿವಳಿಕೆ ಬಲ್ಲವರು‌.‌  ಧನಂಜಯ್ ಅವರಿಂದ ಖಾಸಗಿಯಾಗಿ ಅಭಿನಯದ ಪಟ್ಟುಗಳನ್ನು ಕಲಿತುಕೊಂಡಿದ್ದಾರಂತೆ.‌ಅದೇ ಅನುಭವದಲ್ಲಿ ಕಿರುಚಿತ್ರವೊಂದರಲ್ಲೂ ಅಭಿನಯಿಸಿದ್ದಾರೆ‌. ಈಗ ಅಲೆಯಾಗಿ ಹಾಡಿಗೂ ನಾಯಕ ಆಗಿದ್ದಾರೆ‌. ಈ ಮೂಲಕ ನಟನಾಗಿ ಇಲ್ಲಿಯೇ ನೆಲೆ ನಿಲ್ಲುವ ಅಚಲ ವಿಶ್ವಾಸದಲ್ಲಿದ್ದಾರೆ ರಥ ಕಿರಣ್.

ಸದ್ಯಕ್ಕೆ‌’ ಅಲೆಯಾಗಿ‌‌‌‌ ಬಾ’ ಹಾಡು ‌ಭಾರೀ ಮೆಚ್ಚುಗೆ ಪಡೆದಿದೆ.ಜ‌ನ‌ಕೂಡ ಮೆಚ್ಚುಗೆ ಪಡೆದಿದ್ದಾರೆ. ಅದೇ ಥೀಮ್ ಅನ್ನು ಮುಂದುವರೆಸಲು ಸಹ ಕೆಲವರು ಸಲಹೆ ಕೊಟ್ಟಿದ್ದಾರಂತೆ.‌ಅದನ್ನೇ ಯಾಕೆ ಮಾಡಬಾರದು ಅಂತ, ಕಾತರದಲ್ಲಿರುವ ರಥ ಕಿರಣ್, ಯಾರೇ ಅವಕಾಶ ಕೊಟ್ಟರು ಸಿನಿಮಾ‌ಮಾಡಲು ರೆಡಿ ಇದ್ದಾರೆ.ಅಂತಹ ಅವಕಾಶ ಸಿಕ್ಕಿತೇ ಎನ್ನುವುದು ಮುಂದಿರುವ ಕುತೂಹಲ.

Related Posts

error: Content is protected !!