ಅಂದು ದ್ವಾರಕೀಶ್-‌ ಇಂದು ಶರಣ್! ಮತ್ತೆ ಗುರುಶಿಷ್ಯರು

ತರುಣ್‌ ಸುಧೀರ್‌ ನಿರ್ಮಾಣದ ಮೊದಲಚಿತ್ರ

ಇದೇ ಮೊದಲ ಬಾರಿಗೆ ತರುಣ್‌ ಸುಧೀರ್‌ ನಿರ್ಮಾಣದ ಚಿತ್ರವೊಂದು ಸೆಟ್ಟೇರುತ್ತಿದ್ದು, ಆ ಚಿತ್ರಕ್ಕೆ “ಗುರುಶಿಷ್ಯರು” ಎಂದು ನಾಮಕರಣ ಮಾಡಲಾಗಿದೆ. ೧೯೯೫ರಲ್ಲಿ ಬಿಡುಗಡೆಯಾಗಿದ್ದ “ಗುರುಶಿಷ್ಯರು” ದ್ವಾರಕೀಶ್‌ ಅಭಿನಯದ ಯಶಸ್ವಿ ಚಿತ್ರವಾಗಿತ್ತು. ಈ ಚಿತ್ರದ ಶೀರ್ಷಿಕೆಯಡಿ ನಟ ಶರಣ್‌ ಅಭಿನಯಿಸುತ್ತಿರುವುದು ವಿಶೇಷ. ದ್ವಾರಕೀಶ್‌ ಅವರೇ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಈ ಹಿಂದೆ  ಶರಣ್‌ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು. ಅದು ಹೊಸ ಚಿತ್ರದ ಸೂಚನೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ನಿರ್ಮಾಪಕ ಕಮ್‌ ನಿರ್ದೇಶಕ ತರುಣ್‌ ಸುಧೀರ್‌ ಅವರು, ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಡಿಸೆಂಬರ್‌ ೨೧ರಂದು “ಗುರುಶಿಷ್ಯರು” ಶೀರ್ಷಿಕೆ ಅನಾವರಣಗೊಂಡಿದೆ.

 

ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್  ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕಿಷ್ಟು ಚಿತ್ರದ ಮಾಹಿತಿ. ಇನ್ನುಳಿದಂತೆ, ತಾಂತ್ರಿಕ ವರ್ಗ, ಕಲಾವಿದರು ಇತರೆ ವಿಷಯವನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲಿದ್ದಾರೆ.

Related Posts

error: Content is protected !!