ಮದಗಜನ ನಿರೀಕ್ಷೆ ಸುಳ್ಳಾಗಲೇ ಇಲ್ಲ…! ಸಖತ್ತಾಗಿದೆ ಅಫಿಷಿಯಲ್ ಟೀಸರ್‌

ಪಕ್ಕಾ ಮಾಸ್‌ ಟೀಸರ್‌ ಕೊಟ್ಟ ಮದಗಜ ಟೀಮ್‌‌

 

“ಈ ಪಾಪದ ಪ್ರಪಂಚದಲ್ಲಿ ನಮ್‌ ಪ್ರಯಾಣ… ಕೊಚ್ಚೆಯಲ್ಲಿ ಹವಾಯಿ ಚಪ್ಪಲಿ ಹಾಕ್ಕಂಡ್‌ ನಡೆದಂಗೆ. ನಾವ್‌ ಸರಿಯಾಗ್‌ ನಡೆದ್ರೂ, ಅದು ನಮ್ಮೇಲೆ ಹಾರದೇ ಇರಲ್ಲ…”

ಪಂದ್ಯ ಗೆಲ್ಲಬೇಕು ಅನ್ನೋನು ಪಾಯಿಂಟ್‌ಗೋಸ್ಕರ ಹೊಡಿತಾನೆ. ಪಕ್ಕಾ ಗೆಲ್ಲಬೇಕು ಅನ್ನೋನು ಪಾಯಿಂಟಲ್ಲೇ ಹೊಡಿತಾನೆ..” ಎಂಬ ಮಾಸ್‌ ಡೈಲಾಗ್‌ ಇನ್ನಷ್ಟು ಕುತೂಹಲ ಕೆರಳಿಸಿರುವುದಂತೂ ಸುಳ್ಳಲ್ಲ…

-ಇದು ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಬಿಡುಗಡೆಯಾಗಿರುವ “ಮದಗಜ” ಚಿತ್ರದೊಳಗಿರುವ ಪಂಚ್‌ ಡೈಲಾಗ್…‌ ಡೈಲಾಗ್‌ ಜೊತೆ ಆ ದೃಶ್ಯಗಳನ್ನೂ ನೋಡೋದೋ ಒಂದು ಮಜಾ… ಇದೊಂದು ಪಕ್ಕಾ ಮಾಸ್‌ ಫೀಲ್‌ ಇರುವ ಚಿತ್ರ. ಫ್ಯಾನ್ಸ್‌ಗೆ ಹೇಳಿಮಾಡಿಸಿದ ಡೈಲಾಗ್‌ ಸಾಕಷ್ಟು ಇದೆ ಅನ್ನುವುದಕ್ಕೆ ಇಷ್ಟು ಸಾಕು… ಕೆಳಗಿರುವ ಲಿಂಕ್ ಕ್ಲಿಕ್ ಮಾಡಿ ಟೀಸರ್ ನೋಡಿ…

ಶ್ರೀಮರಳಿ ಅಭಿನಯದ ‘ಮದಗಜ’ ಆರಂಭದಿಂದಲೂ ಒಂದಲ್ಲ ಒಂದು ಸುದ್ದಿಗೆ ಕಾರಣವಾಗುತ್ತಲೇ ಇತ್ತು. ಆದು ಶೀರ್ಷಿಕೆಯಿಂದ ಹಿಡಿದು, ಪೋಸ್ಟರ್‌, ಫಸ್ಟ್‌ ಲುಕ್‌, ಹೀಗೆ ಹಲವು ಕಾರಣಗಳಿಗೆ ಒಂದಷ್ಟು ಕುತೂಹಲ ಮೂಡಿಸಿತ್ತು. ಸಿನಿಮಾದ ಕಥೆ ಇರಲಿ, ಕಲಾವಿದರ ಆಯ್ಕೆ ಇರಲಿ, ಲೊಕೇಷನ್‌ಗಳಿರಲಿ, ತಾಂತ್ರಿಕ ವರ್ಗವೇ ಇರಲಿ ಎಲ್ಲದ್ದರಲ್ಲೂ ಸೈ ಎನಿಸಿಕೊಂಡಿದ್ದ “ಮದಗಜ” ಫಸ್ಟ್‌ ಲುಕ್‌‌ ಅಫಿಷಿಯಲ್ ಟೀಸರ್‌ ಬಿಡುಗಡೆ ಮಾಡುವುದಾಗಿ ಅನೌನ್ಸ್‌ ಮಾಡಿದ್ದೇ ತಡ, ಸಾಕಷ್ಟು ಕುತೂಹಲವಿತ್ತು. ಆ ಕುತೂಹಲ ಎಳ್ಳಷ್ಟೂ ಸುಳ್ಳು ಮಾಡಿಲ್ಲ.
ಹೌದು, ಶ್ರೀಮುರಳಿ ಅವರ ಹುಟ್ಟುಹಬ್ಬ (ಡಿಸೆಂಬರ್‌ 17)ರ ಬೆಳಗ್ಗೆ 9.09ಕ್ಕೆ “ಮದಗಜ” ಚಿತ್ರದ ಫಸ್ಟ್‌ ಲುಕ್‌ ಟೀಸರ್‌ ಹೊರಬಂದಿದೆ. ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ಸಿನಿಮಾ ತಂಡ ಅವರಿಗೆ ಈ ಸಖತ್‌ ರಗಡ್‌ ಆಗಿರುವ, ಪಕ್ಕಾ ಮಾಸ್‌ ಎನಿಸಿರುವ ಚಿತ್ರದಲ್ಲೇನೋ ಇದೆ ಎನಿಸುವಂತಹ ಟೀಸರ್‌ ಅದಾಗಿದ್ದು, ಫ್ಯಾನ್ಸ್‌ಗಂತೂ ಸಖತ್‌ ಕುತೂಹಲ ಕೆರಳಿಸಿದೆ. ಟೀಸರ್‌ನೊಳಗಿರುವ ಡೈಲಾಗ್‌, ಆ ಮಾಸ್‌ ಎಂಟ್ರಿ, ಹಿನ್ನೆಲೆ ಸಂಗೀತ, ಲೊಕೇಷನ್‌ ಎಲ್ಲವೂ ಹೊಸದಾಗಿದೆ. ಈ ಬಾರಿ ಶ್ರೀಮುರಳಿ ಅವರು “ಮದಗಜ” ಮೂಲಕ ಇನ್ನೊಂದು ಘರ್ಜನೆ ಮಾಡಲಿದ್ದಾರೆ ಎಂಬುದಕ್ಕೆ ಈ ಟೀಸರ್‌ ಸಾಕ್ಷಿಯಂತಿದೆ.

ಪ್ರಶಾಂತ್ ನೀಲ್

 

ಇನ್ನು, ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಿರ್ದೇಶಕ ಎಂದೇ ಹೆಸರಾಗಿರುವ ‘ಉಗ್ರಂ’, ‘ಕೆಜಿಎಫ್’ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಅವರು ‘ಮದಗಜ’ ಫಸ್ಟ್ ಲುಕ್ ಟೀಸರ್ ರಿಲೀಸ್ ಮಾಡುವ ಮೂಲಕ ಶುಭ ಹಾರೈಸಿರುವುದು ವಿಶೇಷ.

ನಿರ್ದೇಶಕ ಮಹೇಶ್ ಕುಮಾರ್

ಸದ್ಯಕ್ಕೆ ಬಿಡುಗಡೆಗೊಂಡ ಕೆಲವೇ ಕ್ಷಣಗಳಲ್ಲಿ “ಮದಗಜ” ಚಿತ್ರದ ಟೀಸರ್‌ ಲಕ್ಷಾಂತರ ವೀಕ್ಷಣೆಗೊಂಡು, ಮೆಚ್ಚುಗೆಗೆ ಪಾತ್ರವಾಗಿದೆ. ಈ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ. ಉಮಾಪತಿ ಅವರು ಅದ್ಧೂರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದಾರೆ.

ನಿರ್ಮಾಪಕ ಉಮಾಪತಿ

ಶ್ರೀಮುರಳಿ ಅವರ ಹುಟ್ಟುಹಬ್ಬಕ್ಕೆ ದೊಡ್ಡ ಸರ್ಪ್ರೈಸ್‌ ಕೂಡ ಇದೆ. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಶ್ರೀಮುರಳಿ ಅವರ ಹೊಸ ಚಿತ್ರ ಕೂಡ ಅನೌನ್ಸ್‌ ಆಗಿದೆ. “ಜಂಗಲ್‌ಬುಕ್”‌ ಒಳಗಿರುವ ಒಂದಷ್ಟು ಪಾತ್ರಗಳು ಸದಾ ಎಲ್ಲರನ್ನೂಕಾಡುತ್ತವೆ. ಅಂಥದೊಂದು ಕಾಡುವ ಪಾತ್ರವನ್ನೇ ಇಟ್ಟುಕೊಂಡು ಹೊಸದ್ದೊಂದು ಕಥೆ ಹೆಣೆದು ಶ್ರೀಮುರಳಿ ಅವರಿಗೊಂದು ಚಿತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. ಆದರೆ, ಶ್ರೀಮುರಳಿ ಯಾವ ಕಥೆ ಹಿಂದೆ ಹೊರಟಿದ್ದಾರೆ, ಯಾರು ನಿರ್ದೇಶಕ ಇತ್ಯಾದಿ ವಿಷಯವನ್ನು ಹೊಂಬಾಳೆ ಫಿಲ್ಮ್ಸ್‌ ಅನೌನ್ಸ್‌ ಮಾಡಲು ಸಜ್ಜಾಗಿದೆ.

Related Posts

error: Content is protected !!