ಪದವಿಪೂರ್ವ ಶೂಟಿಂಗ್‌ ಸೆಟ್‌ಗೆ ಜಗ್ಗೇಶ್‌ ಭೇಟಿ – ಉತ್ಸಾಹದಲ್ಲಿ ಚಿತ್ರತಂಡ

ಕಲಾವಿದರಿಗೆ ಪ್ರಮುಖ ಸಲಹೆ ನೀಡಿದ ನವರಸನಾಯಕ

ಕನ್ನಡ ಸಿನಿಮಾಗಳ ಚಿತ್ರೀಕರಣ ಸಂದರ್ಭದಲ್ಲಿ ಒಂದಷ್ಟು ಸ್ಟಾರ್‌ ನಟರು ಆಕಸ್ಮಿಕ ಭೇಟಿ ನೀಡಿ, ಆ ಚಿತ್ರತಂಡಕ್ಕೆ ಅಚ್ಚರಿ ನೀಡುವುದು ಹೊಸದೇನಲ್ಲ. ದರ್ಶನ್‌, ಸುದೀಪ್‌, ಪುನೀತ್‌ ಸೇರಿದಂತೆ ಒಂದಷ್ಟು ನಟರು ತಮ್ಮ ಪ್ರೀತಿಗೆ ಪಾತ್ರರಾದ ಸಿನಿಮಾ ನಿರ್ಮಾಪಕರು, ನಿರ್ದೇಶಕರ ಸಿನಿಮಾ ಸೆಟ್‌ಗೆ ಭೇಟಿ ನೀಡಿದ್ದುಂಟು. ಈಗ ನಟ ಜಗ್ಗೇಶ್ ಕೂಡ ಹೊಸಬರ ಚಿತ್ರದ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಭೇಟಿ ನೀಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.


ಹೌದು, ಜಗ್ಗೇಶ್‌ ಹಾಗೆ ಭೇಟಿ ನೀಡಿದ್ದು, “ಪದವಿಪೂರ್ವ” ಚಿತ್ರದ ಸೆಟ್‌ಗೆ. ಹರಿಪ್ರಸಾದ್ ಜಯಣ್ಣ ನಿರ್ದೇಶಿಸುತ್ತಿರುವ ಈ ಚಿತ್ರ, ಯೋಗರಾಜ್ ಭಟ್ ಹಾಗು ರವಿ ಶಾಮನೂರ್ ನಿರ್ಮಿಸುತ್ತಿರುವ “ಪದವಿಪೂರ್ವ” ಚಿತ್ರದ ಶೂಟಿಂಗ್ ಜೋರಾಗಿಯೇ ನಡೆಯುತ್ತಿದೆ. ಈ ಚಿತ್ರದ ಸೆಟ್‌ಗೆ ಸರ್ಪ್ರೈಸ್ ಭೇಟಿ ನೀಡಿದ ಜಗ್ಗೇಶ್‌ ಅವರು, ಕೆಲ ಕಾಲ ಅವರೊಂದಿಗೆ ಚರ್ಚಿಸಿ, ಅಲ್ಲಿಯೇ ಇದ್ದು, ಕೆಲ ಸೀನ್‌ಗಳನ್ನೂ ವೀಕ್ಷಿಸಿ, ಸಂತಸಪಟ್ಟಿದ್ದಾರೆ.

ನಿರ್ದೇಶಕ ಹರಿಪ್ರಸಾದ್ ಜಯಣ್ಣ ಹಾಗು ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ ಅವರ ಕೆಲಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಜಗ್ಗೇಶ್‌ ಅವರು, ಸೆಟ್‌ನಲ್ಲಿದ್ದ ಕೆಲವು ಕಲಾವಿದರೊಂದಿಗೂ ಮಾತನಾಡಿ, ಅವರಿಗೆ ಸಲಹೆಗಳನ್ನೂ ನೀಡಿದ್ದಾರೆ. ಸಹಜವಾಗಿಯೇ ಚಿತ್ರತಂಡಕ್ಕೆ ಜಗ್ಗೇಶ್‌ ಅವರ ಈ ಭೇಟಿ ಖುಷಿ ಕೊಟ್ಟಿದ್ದಲ್ಲದೆ, ಮತ್ತಷ್ಟು ಉತ್ಸಾಹ ತುಂಬಿದೆ. ಕಳೆದ ವಾರವಷ್ಟೇ ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ಬೆಂಗಳೂರಿನ ಸುತ್ತಮುತ್ತಲ ಸ್ಥಳಗಳಲ್ಲಿ ಚಿತ್ರೀಕರಣ ನಡೆಯುತ್ತಿದ. ಚಿತ್ರಕ್ಕೆ ಪೃಥ್ವಿ ಶಾಮನೂರ್ ನಾಯಕಿ. ಅಂಜಲಿ ಅನೀಶ್‌ ಮತ್ತು ಯಶಾ ಶಿವಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

Related Posts

error: Content is protected !!