ಬಿಗ್‌ ಬಾಸ್‌ ಜೊತೆ ಮಾತುಕತೆ! ರಿಯಾಲಿಟಿ ಶೋ ಕುರಿತ ಪ್ರಕ್ರಿಯೆ ಜೋರು

ಸಂಕ್ರಾಂತಿಗೆ ಬಿಗ್‌ಬಾಸ್‌ ರಿಯಾಲಿಟಿ ಶೋ ಶುರು!

‌ ಮಾತುಕತೆಯಲ್ಲಿ ಪರಮೇಶ್ವರ್‌, ಸುದೀಪ್

ಕನ್ನಡ ಕಿರುತೆರೆಯಲ್ಲಿ ಬಿಗ್‌ಬಾಸ್‌ ಅತೀ ಕುತೂಹಲ ಕೆರಳಿಸುವ ರಿಯಾಲಿಟಿ ಶೋ. ಇದುವರೆಗೂ ಕಿಚ್ಚ ಸುದೀಪ್‌ ಅತ್ಯದ್ಭುತವಾಗಿಯೇ ಆ ಬಿಗ್‌ಬಾಸ್‌ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದಾರೆ. ಈಗ ಮತ್ತೊಂದು ಸುತ್ತಿನ ಬಿಗ್‌ಬಾಸ್‌ ಯಾವಾಗ ನಡೆಯುತ್ತೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಕುರಿತು ಈಗಾಗಲೇ ಒಂದಷ್ಟು ಅಂತೆ-ಕಂತೆಗಳೂ ಶುರುವಾಗಿವೆ. ಆಗುತ್ತೋ, ಇಲ್ಲವೋ ಎಂಬ ಮಾತಿಗೆ ಕೊನೆಗೂ ಬ್ರೇಕ್‌ ಬಿದ್ದಿದೆ. ಸ್ವತಃ ಕಾರ್ಯಕ್ರಮದ ಮುಖ್ಯಸ್ಥ ಪರಮೇಶ್ವರ್‌ ಗುಂಡ್ಕಲ್‌ ಅವರು ಬಿಗ್‌ಬಾಸ್‌ ರಿಯಾಲಿಟಿ ಶೋ ಕುರಿತು ಸ್ಪಷ್ಟಪಡಿಸಿದ್ದಾರೆ. ಸದ್ಯ ಬಿಗ್‌ಬಾಸ್‌ ರಿಯಾಲಿಟಿ ಶೋ ಕುರಿತಂತೆ ಮಾತುಕತೆಗಳು ಪ್ರಗತಿಯಲ್ಲಿವೆ ಎಂದು ಸುದೀಪ್‌ ಜೊತೆಗೆ ಮಾತಿಗೆ ಕುಳಿತಿರುವ ಫೋಟೋವೊಂದನ್ನು ಹಂಚಿಕೊಂಡು ತಮ್ಮ ಮುಖಪುಟದಲ್ಲಿ ಶೇರ್‌ ಮಾಡಿದ್ದಾರೆ.


ಎಂಟನೇ ಆವೃತ್ತಿಯ ಬಿಗ್‌ಬಾಸ್‌ ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಅಂತಿಮ ಹಂತ ತಲುಪಬೇಕಿತ್ತು. ಕೊರೊನಾ ಅಡ್ಡಿಯಾದ ಹಿನ್ನೆಲೆಯಲ್ಲಿ ಬಿಗ್‌ಬಾಸ್‌ ಕೂಡ ತಡವಾಗಿದೆ. ಈಗ ಅದಕ್ಕೆ ಚಾಲನೆ ದೊರೆಯುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಸಂಕ್ರಾಂತಿ ವೇಳೆಗೆ ಬಿಗ್‌ಬಾಸ್‌ಗೆ ಚಾಲನೆ ದೊರೆಯಬಹುದು. ಎಂದಿನಂತೆ ಈ ಸಲದ ಅವೃತ್ತಿಯಲ್ಲೂ ಒಂದಷ್ಟು ಸೆಲಿಬ್ರಿಟಿಗಳ ಜೊತೆಗೆ ಸಾಮಾನ್ಯರೂ ಪಾಲ್ಗೊಳ್ಳುವ ಸಾಧ್ಯತೆ ಇದೆ. ಇನ್ನು, ಕೊರೊನಾ ಹಾವಳಿಯಿಂದ ಬೇಸತ್ತ ಮಂದಿಗೂ ಭಯವಿದೆ. ಹಾಗಾಗಿ, ಬಿಗ್‌ಬಾಸ್‌ಗೆ ಬರುವ ಸ್ಪರ್ಧಿಗಳಿಗೆ ಪರೀಕ್ಷೆ ನಡೆಸಿ, ನಂತರ ಅವರನ್ನು ಕ್ವಾರಂಟೈನ್‌ ಮಾಡಿ ನಂತರ ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸುವ ಯೋಚನೆಯೂ ಕಾರ್ಯಕ್ರಮದ ಮುಖ್ಯಸ್ಥರಿಗೆ ಇದೆ.

 

 

Related Posts

error: Content is protected !!