ಆಕ್ಟ್ ತಂಡಕ್ಕೆ ದರ್ಶನ್‌‌ ಸಾಥ್-‌ ಶುಭಕೋರಿದ ದಚ್ಚು

 

ನಿಮ್ಮ ಚಿತ್ರಕ್ಕೆ ಒಳ್ಳೆಯದಾಗಲಿ-ದರ್ಶನ್‌

ಕನ್ನಡ ಸಿನಿಮಾರಂಗದಲ್ಲಿ ಯಾವುದೇ ಸಿನಿಮಾ ಗೆಲುವು ಕೊಡಲಿ. ಅದು ಹೊಸಬರಾಗಿರಲಿ, ಹಳಬರಾಗಿರಲಿ ಆ ಚಿತ್ರತಂಡದವರನ್ನು ಪ್ರೀತಿಯಿಂದಲೇ ಗೌರವಿಸಿ, ಸಹಕಾರ ಕೊಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈಗ ಕೊರೊನಾ ಹಾವಳಿಯಿಂದ ತತ್ತರಿಸಿ ಹೋಗಿದ್ದ ಸಿನಿಮಾ ರಂಗದಲ್ಲಿ ಧೈರ್ಯವಾಗಿಯೇ ತಮ್ಮ ಚಿತ್ರವನ್ನು ಬಿಡುಗಡೆ ಮಾಡಿ, ಗೆಲುವು ಕಂಡಿರುವ “ಆಕ್ಟ್‌ -1978” ಚಿತ್ರತಂಡಕ್ಕೆ ನಟ ದರ್ಶನ್‌ ಅವರು ಬೆಂಬಲ ನೀಡಿದ್ದಾರೆ.

ಅಷ್ಟೇ ಅಲ್ಲ, ನಿಮ್ಮೊಂದಿಗೆ ನಾವಿರುವುದಾಗಿಯೂ ಧೈರ್ಯ ತುಂಬಿದ್ದಾರೆ. “ಆಕ್ಟ್-1978″ ಚಿತ್ರದ ಬಗ್ಗೆ ಪ್ರೇಕ್ಷಕರು, ಅಭಿಮಾನಿಗಳ ಮೆಚ್ಚುಗೆಯು ಒಂದು ಕಡೆಯಾದರೆ, ಮಾಧ್ಯಮ, ಪತ್ರಿಕೆಗಳಲ್ಲಿ ಬಂದ ಒಳ್ಳೆಯ ವಿಮರ್ಶೆಗಳು ಇನ್ನೊಂದು ಕಡೆ. ಇದನ್ನು ಕೇಳಿಸಿಕೊಂಡ ನಟ ದರ್ಶನ್ ಅವರು, ಎಲ್ಲೆಡೆ ಒಳ್ಳೆಯ ಅಭಿಪ್ರಾಯಕ್ಕೆ ಕಾರಣವಾಗಿರುವ ” ಆಕ್ಟ್-1978″ ಚಿತ್ರ ತಂಡದ ಸದಸ್ಯರನ್ನು ತಮ್ಮ ಮನೆಗೆ ಆಹ್ವಾನಿಸಿ, ಅವರೊಂದಿಗೆ ಕೆಲಕಾಲ ಮಾತನಾಡಿ, ಚಿತ್ರದ ಬಗ್ಗೆ ಒಂದಷ್ಟು ಚರ್ಚಿಸಿ,ತಾವು ನಿಮ್ಮ ಸಿನಿಮಾ ಬೆಂಬಲಕ್ಕೆ ನಿಲ್ಲುವುದಾಗಿ ಧೈರ್ಯ ತುಂಬಿದ್ದಾರೆ.

ದರ್ಶನ್‌ ಅವರ ಈ ಮಾತಿಗೆ ಖುಷಿಗೊಂಡಿರುವ “ಆಕ್ಟ್-‌೧೯೭೮” ಚಿತ್ರತಂಡ, ಅವರಿಗೆ ಧನ್ಯವಾದ ಅರ್ಪಿಸಿದೆ. ಈ ಸಂದರ್ಭದಲ್ಲಿ ನಿರ್ದೇಶಕ ಮಂಸೋರೆ, ಛಾಯಾಗ್ರಾಹಕ ಸತ್ಯಹೆಗಡೆ, ನಟ ಸಂಚಾರಿ ವಿಜಯ್‌, ನಿರ್ಮಾಪಕ ದೇವರಾಜ್‌, ವೀರೇಶ್‌ ಇತರರು ಇದ್ದರು.

 

 

Related Posts

error: Content is protected !!