ಎಲ್ಲರೂ ಪ್ರೀತಿಸುತ್ತ ಬಾಳೋಣ ಜಗ್ಗೇಶ್‌ ನುಡಿಮುತ್ತು

ಇರೋ ತನಕ ಸಂಬ‍ಂಧ, ಹೋದ ಮೇಲೆ ನೆನಪು ಮಾತ್ರ!

ಜಗ್ಗೇಶ್‌ ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಅವರು ಹಾಕುವ ಒಂದೊಂದು ಸ್ಟೇಟಸ್‌ನಲ್ಲೂ ಸಾಕಷ್ಟು ಸಂದೇಶ ಅಡಗಿರುತ್ತೆ. ಅವರು ಆಗಾಗ ತಮ್ಮ ಟ್ವಿಟರ್‌ ಖಾತೆಯಲ್ಲಿ, ಫೇಸ್‌ಬುಕ್‌ ಖಾತೆಯಲ್ಲಿ ಒಂದಷ್ಟು ಫೋಟೋ ಜೊತೆ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಜಗ್ಗೇಶ್‌ ಬರೆದುಕೊಂಡಿದ್ದೇನು ಗೊತ್ತಾ?

ಅವರೇ ಬರೆದುಕೊಂಡ ಬರಹವಿದು…
“ಇರುವವರೆಗೂ ಸಂಬಂಧಗಳು, ಹೋದ ಮೇಲೆ ನೆನಪು ಮಾತ್ರ…” ಹೀಗೆ ಬರೆದುಕೊಂಡು ಅದರೊಂದಿಗೆ ತಮ್ಮ ಪತ್ನಿ ಪರಿಮಳ, ಮಕ್ಕಳಾದ ಗುರುರಾಜ್‌, ಯತಿ ಜಗ್ಗೇಶ್‌ ಹಾಗು ಸೊಸೆ, ಮೊಮ್ಮಗನೊಂದಿಗಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಾಕಿದ್ದಾರೆ. ಅಷ್ಟಕ್ಕೂ ಈ ಫೋಟೋ ಹಾಕಿಕೊಂಡು ಬರೆದಿಕೊಂಡಿರುವ ಜಗ್ಗೇಶ್‌, ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬದ ವೇಳೆ. ಇತ್ತೀಚೆಗೆ ಪರಿಮಳ ಜಗ್ಗೇಶ್‌ ಅವರ ಹುಟ್ಟುಹಬ್ಬವನ್ನು ಕುಟುಂಬದವರೆ ಸೇರಿ ಆಚರಿಸಿಕೊಂಡಿದ್ದಾರೆ. “ಮಡದಿ ಪರಿಮಳನಿಗೆ ಸಣ್ಣ ಸಂತೋಷ ನೀಡಿದ ಪುಟ್ಟ ಸಂಸಾರದ ಸದಸ್ಯರು. ಭೂಮಿಯಲ್ಲಿ ಇರುವಷ್ಟು ದಿನ ಮಾತ್ರ ಸಂತೋಷ ಸಂಬಂಧ, ನಂತರ ನೆನಪು ಮಾತ್ರದ ನಶ್ವರ ಜಗತ್ತು. ಸಾಧ್ಯವಾದಷ್ಟು ಸಂತೋಷ ಪಡೆದು ಹಂಚಿ ಬಾಳಿಬಿಡಬೇಕು. ಇರುವವರೆಗು ಸಂಬಂಧಗಳು ಹೋದಮೇಲೆ ನೆನಪು ಮಾತ್ರ. ಬದುಕಿನ ಚಿತ್ರಕಥೆ ದೇವರಿಂದ ಬರೆಯಲ್ಪಟ್ಟ ಕಥಾಸಂಗಮ. ನಾವೆಲ್ಲಾ ಪಾತ್ರದಾರಿಗಳು ಮಾತ್ರ. ನಮ್ಮ ಬದುಕಿನ ಅದ್ಭುತ ಚಿತ್ರಕಥೆ ಬರೆದು ಅದರಲ್ಲಿ ಕೋಟ್ಯಂತರ ಪ್ರೀತಿಸುವ ನಿಮ್ಮ ಆತ್ಮಗಳನ್ನು ನಮ್ಮ ಬದುಕಿಗೆ ಸೇರಿಸಿದ ದೇವರಿಗೆ ಧನ್ಯವಾದ. ಪ್ರೀತಿಸುತ್ತ ಬಾಳುವ. ಪ್ರೀತಿ ದೇವರ ಇನ್ನೊಂದು ರೂಪ” ಎಂದು ಅರ್ಥಪೂರ್ಣವಾಗಿ ಬರೆದುಕೊಂಡಿದ್ದಾರೆ.

Related Posts

error: Content is protected !!