ರಾಜಕೀಯದ ಜತೆಗೆ ಚಿತ್ರರಂಗಕ್ಕೂ ಕಾಲಿಟ್ಟ ಕರ್ನಾಟಕದ ಸಿಂಗಂ!

( exclusive cinilahari)

ಅರಬ್ಬಿ ಚಿತ್ರಕ್ಕಾಗಿ ಬಣ್ಣ ಹಚ್ಚಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ

ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಪಡೆದಿದ್ದ ಮಾಜಿ‌ ಐಪಿಎಸ್ ಅಧಿಕಾರಿ ಅಣ್ಣಾಮಲೈ , ಮೊನ್ನೆ ಮೊನ್ನೆಯಷ್ಠೇ ರಾಜಕೀಯ ಅಖಾಡಕ್ಕೆ ಪ್ರವೇಶಿಸಿದರು‌. ಪ್ರಧಾನಿ‌ ಮೋದಿ ಅವರ ಕಾರ್ಯವೈಖರಿಗೆ ಪ್ರಭಾವಿತರಾಗಿದ್ದ ಅವರು, ಬಿಜೆಪಿಗೆ ಅಧಿಕೃತ ವಾಗಿ ಸೇರ್ಪಡೆಗೊಂಡಿದ್ದು ನಿಮಗೂ ಗೊತ್ತು. ಇದೀಗ ಅವರ ಮತ್ತೊಂದು ಸಂಗತಿ ರಿವೀಲ್ ಆಗಿದೆ. ರಾಜಕೀಯ ರಂಗ ಪ್ರವೇಶಿಸಿದ ಬೆನ್ನಲೇ ನಟರಾಗಿ ಈಗ ಸಿನಿಮಾ ರಂಗಕ್ಕೂ ಎಂಟ್ರಿಯಾಗುತ್ತಿದ್ದಾರೆ. ರಾಜಕೀಯಕ್ಕೆ ತಮ್ನ ಸ್ವಂತ ಊರು ತಮಿಳುನಾಡನ್ನೇ ಕರ್ಮಭೂಮಿಯನ್ನಾಗಿ ಸ್ವೀಕರಿಸಿರುವ ಅವರು, ಬಣ್ಣದ ಬದುಕನ್ನು ಕರ್ನಾಟಕದಿಂದ ಆರಂಭಿಸುತ್ತಿದ್ದಾರೆ‌. ರಾಜು ಪಾವಗಡ ನಿರ್ದೇಶನದ’ ಅರಬ್ಬಿ’ ಹೆಸರಿನ ಚಿತ್ರಕ್ಕಾಗಿ ಅವರು ಇದೇ ಮೊದಲು ನಟರಾಗಿ ಬಣ್ಣ ಹಚ್ಚಿದ್ದಾರೆ‌.

ಅಷ್ಟೇ ಅಲ್ಲ, ಎರಡು ದಿನಗಳ ಕಾಲ ಬೆಂಗಳೂರು ಹಾಗೂ ರಾಮನಗರ ಸಮೀಪದ ಜಾನಪದ ಲೋಕದಲ್ಲಿ ನಡೆದ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ. ಇದನ್ನು ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ‌. ಸದ್ಯಕ್ಕೆ ಭಾರೀ ಸುದ್ದಿಯಲ್ಲಿರುವ ಅಣ್ಣಾಮಲೈ ಅವರನ್ನು ‘ಅರಬ್ಬಿ ಚಿತ್ರ ತಂಡ’ ಇದೇ ಮೊದಲು, ಸಿನಿಮಾಕ್ಕೆ ಕರೆ ತಂದಿರು ವುದೇ ಕುತೂಹಲ ಕಾರಿಯಾದ ಸಂಗತಿ. ಅ ಬಗ್ಗೆ ಅತೀವ ಸಂತಸದಲ್ಲಿರುವ ನಿರ್ದೇಶಕ ರಾಜು ಪಾವಗಡ, ಕರ್ನಾಟಕದ ಸಿಂಗಂ ಅಣ್ಣಾಮಲೈ ಅವರನ್ನು ಚಿತ್ರಕ್ಕೆ ಕರೆತಂದಿದ್ದು ಹೇಗೆ, ಯಾವ ರೀತಿಯ ಪಾತ್ರಕ್ಕೆ ಅಣ್ಣಾಮಲೈ ಅವರು ಬಣ್ಣ ಹಚ್ಚಿದ್ದಾರೆ, ಅವರನ್ನೇ ಯಾಕೆ ಚಿತ್ರ ತಂಡ ಆಯ್ಕೆ ಮಾಡಿಕೊಂಡಿತು ಎನ್ನುವ ಬಗ್ಗೆ ಚಿತ್ರದ ನಿರ್ದೇಶಕ ರಾಜು ಪಾವಗಡ ಉತ್ತರಿಸಿದ್ದಾರೆ.

‘ ನಮ್ಮ ಪಾಲಿಗೆ ಇದೊಂದು ಹೆಮ್ಮೆಯ ಸಂಗತಿ. ಅವರು ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಎಂಟ್ರಿಯಾದ ನಂತರ ಸಿನಿಮಾ‌, ಗಿನಿಮಾ ಅಂತ ಬರುತ್ತಾರೋ ಇಲ್ಲವೋ ಅಂತ ಅನುಮಾನ ಇತ್ತು‌. ಆದರೆ ಅವರನ್ನು ಸಂಪರ್ಕಿಸಿ, ನಮ್ಮ ಚಿತ್ರದಲ್ಲಿನ ವಿಶೇಷ ಪಾತ್ರದಲ್ಲಿ ಅಭಿನಯಿಸಬೇಕು ಅಂತ ಕೇಳಿಕೊಂಡಾಗ ಆಯ್ತು ನೋಡೋಣ ಅಂದಿದ್ದರು. ಆದರೂ ಅನುಮಾನ ಇತ್ತು. ಕೊನೆಗೂ ಅವರು ನಮ್ಮ ಮನವಿಗೆ ಮನ್ನಣೆ ನೀಡಿ,
ಚಿತ್ರೀಕರಣಕ್ಕೆ ಬಂದರು‌. ಎರಡು ದಿವಸ ಚಿತ್ರೀಕರಣದಲ್ಲಿ ಭಾಗವಹಿಸಿದರು. ಬೆಂಗಳೂರು ಹಾಗೂ ರಾಮನಗರದ ಜಾನಪದ ಲೋಕದಲ್ಲಿ‌ಚಿತ್ರೀಕರಣ ನಡೆಯಿತು‌.‌ ಚಿತ್ರೀಕರಣಕ್ಕೆ ಅವರು‌ ತುಂಬಾ ಸಪೋರ್ಟ್ ಮಾಡಿದರು’ ಎನ್ನುತ್ತಾರೆ ನಿರ್ದೇಶಕ ರಾಜು ಪಾವಗಡ. ಇನ್ನು‌ ಕುತೂಹಲ ಇರೋದು ಅಣ್ಣಾಮಲೈ ಅವರ ಪಾತ್ರ.


ಅಂತಾರಾಷ್ಟ್ರೀಯ ಈಜು ಪಟು ವಿಶ್ವಾಸ್ ಅವರ ಜೀವನ ಕುರಿತ ಚಿತ್ರವೇ ‘ಅರಬ್ಬಿ’.ಈ‌ ಚಿತ್ರದಲ್ಲಿ ವಿಶ್ವಾಸ್ ಕೋಚ್ ಆಗಿ ಅಣ್ಣಾಮಲೈ ಕಾಣಿಸಿಕೊಳ್ಳುತ್ತಿದ್ದಾರೆ‌. ಚಿತ್ರೀಕರಣದ ಸಮಯದಲ್ಲಿ ಅವರೊಂದಿಗೆ ತಮಿಳು ಚಿತ್ರ ನಿರ್ದೇಶಕ ಡೆಸಿಂಗ್ ಪೆರಿಯ ಸ್ವಾಮಿ ಭಾಗವಹಿಸಿದ್ದರು.

Related Posts

error: Content is protected !!