ನನ್ನೇನು‌ ಹೆದ್ರಸ್ತೀರಾ – ಗುಡುಗಿದ ವಿಲನ್ !

ಕೆಜಿಎಫ್ – 2 ನಲ್ಲಿ ಪ್ರಕಾಶ್ ರೈ – ವಿರೋಧಿಸಿದವರಿಗೆ ಬಹುಭಾಷಾ ನಟ ರೈ ಕೇಳಿದ ಪ್ರಶ್ನೆಯೇನು ಗೊತ್ತಾ?

ಪ್ರಕಾಶ್ ರೈ ಅವರನ್ನು‌ ನಿಮ್ಗೆ ನೋಡ್ಲಿಕ್ಕೆ ಇಷ್ಟ ಇಲ್ವಾ ನೋಡ್ಬೇಡಿ, ಅದು ನಿಮ್ಮ ಹಕ್ಕು….

– ‘ಕೆಜಿಎಫ್ 2 ‘ಚಿತ್ರದಲ್ಲಿ ತಾವು‌ ನಟಿಸುತ್ತಿರುವುದರ ವಿರುದ್ಧ ಸೋಷಲ್ ಮೀಡಿಯಾದಲ್ಲಿ ವ್ಯಕ್ತವಾದ ವಿರೋಧಕ್ಕೆ ನಟ ಪ್ರಕಾಶ್ ರೈ ನೀಡಿದ ಮೊದಲ ಪ್ರತಿಕ್ರಿಯೆ ಇದು.
ಖಾಸಗಿ ವಾಹಿನಿಯೊಂದಕ್ಕೆ‌ ನೀಡಿದ ಸಂದರ್ಶ‌ನದಲ್ಲಿ ಕೋರೋನಾ ನಂತರದ ವಿದ್ಯಮಾನಗಳು, ಆನಂತರ ಮತ್ತೆ ಕೆಜಿಎಫ್ 2 ಚಿತ್ರದೊಂದಿಗೆ ಕ್ಯಾಮೆರಾ ಎದುರಿಸಿದ ಕ್ಷಣಗಳನ್ನು ತುಂಬಾ ಮುಕ್ತವಾಗಿ ಹಂಚಿಕೊಂಡಿದ್ದಾರೆ ನಟ ಪ್ರಕಾಶ್.

ನೋಡಿ, ನಾನು ಸಾಹಿತ್ಯ ಓದಿಕೊಂಡು ಕೆಳಗಡೆಯಿಂದ ಮೇಲೆ ಬಂದವನು‌ನಾನು. ತುಂಬಾ ಈಜಿ ಇತ್ತು. ಅದು ಹೇಗೆ? ಒಬ್ಬ ಪ್ರತಿಭಾವಂತ ನಟ, ಒಳ್ಳೆಯವನು, ಚೆನ್ನಾಗಿದ್ದಾನೆ ಅಂತ ಜನರ ಮೆಚ್ಚುಗೆಗಷ್ಟೇ ಸಿಮೀತವಾಗಿದ್ದರೆ ನನಗೇನು‌ ಬದುಕು‌ ಕಷ್ಟವೇ ಇರಲಿಲ್ಲ. ಅದ್ರೆ ನಾನು ಅದನ್ನು ದಾಟಿ, ನನ್ನನ್ನು ನಾನು‌ ಕಂಡುಕೊಂಡಿದ್ದೇನೆ. ಹಾಗಾಗಿ ಇದೆಲ್ಲ ವಿವಾದ ಇರಬಹುದು. ಕೆಲವರಿಗೆ ಇಷ್ಟವಾಗದೆ ಇರಬಹುದು ಎನ್ನುವ ಮೂಲಕ ತಾವೇನು‌ ತಮ್ಮ ವ್ಯಕ್ತಿತ್ವವೇನು ಎಂಬುದನ್ನು ತೆರೆದಿಡುತ್ತಾರೆ ಪ್ರಕಾಶ್ ರೈ.

ಇನ್ನು’ ಕೆಜಿಎಫ್ 2′ ನಲ್ಲಿ ಅವರಿದ್ದಾರೆನ್ನುವುದಕ್ಕೆ ವ್ಯಕ್ತವಾದ ವಿರೋಧಕ್ಕೆ ತಮ್ಮದೇಯಾದ ರೀತಿಯಲ್ಲಿ ಉತ್ತರ ನೀಡುತ್ತಾರೆ ಪ್ರಕಾಶ್ ರೈ.
ಯಾಕೆ, ನಾನೇಕೆ ನಟಿಸಬಾರದು? ನಿಮ್ಗೆ ಅಂಥದ್ದೇನು‌ ಮಾಡಿದ್ದೇನೆ? ನಮಗೂ ನಿಮಗೂ ಏನಾದ್ರೂ ಪರಿಚಯ ಇದೆಯಾ? ಇಲ್ಲ, ನಿಮ್ಮನೇ ದರೋಡೆ ಮಾಡಿದ್ದೇನಾ? ಇಲ್ಲ. ಹಾಗಾದ್ರೆ ಏನು? ನಾನು ವ್ಯವಸ್ಥೆ ಕುರಿತುಒಂದಷ್ಟು ಪ್ರಶ್ನೆ ಮಾಡಿದ್ದೇನೆ. ಆ ಪ್ರಶ್ನೆಗಳು ಸರಿ‌ಯಿದ್ದರೆ ಸರಿ ಅನ್ನಿ, ಇಲ್ಲ ಅಂದ್ರೆ ತಪ್ಪ ಅನ್ನಿ. ಅದು ಬಿಟ್ಟು ನೀನು ಕೆಲಸ ಮಾಡೋಂಗಿಲ್ಲ.‌ಇಲ್ಲಿ‌ಬದುಕುವುದಕ್ಕೆ ಯೋಗ್ಯತೆ ಇಲ್ಲ.ಪಾಕಿಸ್ತಾನಕ್ಕೆ ಹೋಗು ಅಂತ ಹೇಳೋದು ಎಷ್ಟು ಸರಿ. ಇಷ್ಟಕ್ಕೂ‌ನಾನೇಕೆ ಪಾಕಿಸ್ತಾನಕ್ಕೆ ಹೋಗಬೇಕು? ದೇಶ ಬಿಟ್ಟು ಹೋಗು‌ಅಂದ್ರೆ ನಾನೇಕೆ ಹೋಗಬೇಕು ಅಂತೀನಿ. ನಾನು, ನನ್ನ ಹೆಂಡ್ತಿ, ಮಕ್ಕಳು, ಮನೆಯವರು ..ಸೇರಿ‌ನಾನು ಕೂಡ ಎಲ್ಲತರನೇ ಅಲ್ವಾ? ಎನ್ನುವುದು ಪ್ರಕಾಶ್ ರೈ ನೋವಿನ‌ಮಾತು.


ಆ‌ಸಿನಿಮಾನೇನು‌ನಿಮ್ಮ ವಿರುದ್ಧ ಮಾಡ್ತಿದ್ದೇನಾ, ಅದೊಂದುಬಲವನ್ನು ಪ್ರಯೋಗಿಸ್ತಿದ್ದೇನಾ,ಅಲ್ಲ. ಆ ನಿರ್ದೇಶಕ ಏನ್ ಮಾಡ್ದಾ, ಆ ಕತೆ ಏನ್ ಮಾಡ್ತು, ಆ ನಿರ್ಮಾಪಕ ಏನ್ ಮಾಡ್ದಾ, ಅಲ್ಲಿ ಕೆಲಸ ಮಾಡೋ‌ಜನ್ರು ಏನ್ ಮಾಡಿದ್ರು? ಅಂದ್ರೆ ಒಂದ್ ಸಿನಿಮಾದಲ್ಲಿ ಯಾರ್ ಇರ್ಬೇಕು, ಯಾರ್ ಇರ್ಬಾರ್ದು ಅಂತ ನೀವ್ ಡಿಸೈಡ್ ಮಾಡ್ತೀರಾ? ನಿಮ್ಗೆ ಪ್ರಕಾಶ್ ರೈ ನ ನೋಡ್ಲಿಕ್ಕೆ ಇಷ್ಡ ಇಲ್ವಾ, ನೋಡ್ಬೀಡಿ, ಅದು ನಿಮ್ಮ ಹಕ್ಕು. ನೋಡಿ, ನಮ್ಮಿಂದ ಸಿನಿಮಾ‌ಅಲ್ಲ,ಪ್ರೇಕ್ಷಕರಿಂದ ಸಿನಿಮಾ.‌ ಇವತ್ತು ಆರು ತಿಂಗಳು ಏನಾಯ್ತು? ನಾನು ಒಬ್ಬ ಹೀರೋ ಹತ್ರ ಮಾನಾಡ್ತಾ ಹೇಳಿದೆ. ನಾನೊಬ್ಬ ದೊಡ್ಡ ನಟ, ನೀನು ದೊಡ್ಡ ಹೀರೋ. ಸಿನಿಮಾ‌ಇಲ್ಲ, ಕ್ಯಾಮೆರಾ ಇಲ್ಲ. ನಾವ್ಯಾರು, ಸಾಮಾನ್ಯ ಮನುಷ್ಯರೇ ಅಲ್ವಾ.ಮತ್ತೆ. ಅದರಾಚೆ, ಇವ್ನು ಧರ್ಮದ ವಿರುದ್ಧ ಇದವನು,ನನ್ನ ಧರ್ಮದವನಲ್ಲ, ನಮ್ಮ ನಾಯಕನ‌ಪರವಾಗಿದ್ದವನಲ್ಲ.ಒಂದು ವ್ಯವಸ್ಥೆ ಯನ್ನು ಒಪ್ಕೊಳ್ಳಲ್ಲ, ಅಂತ ಎಲ್ಲರೂ ಸೇರಿಕೊಂಡು ನಿರಾಕರಿಸ್ತೀವಿ ಅಂತೀರಾ.‌ಅಂದ್ರೆ ಹೆದಸ್ತೀರಾ, ಉಚ್ಚಾಟನೆ ಮಾಡ್ತೀರಾ,ಹಾಗಾದ್ರೂ ಬಾಯಿ‌ಮುಚ್ಚಲಿ ಅಂತೀರಾ, ಅಂದ್ರೆ ನೀವ್ ಬಳಸ್ತೀರೋ ದಾರಿ ಏನು? ಅದು ಹಿಂಸೆ ಅಲ್ವಾ.‌ಅದು ಅಸೂಕ್ಷ್ಮತೆ ಅಲ್ವಾ. ಒಬ್ರ ಜತೆ ವಾದ ಮಂಡಿಸುವಾಗ ಚರ್ಚೆ ಕನ್ವಿಷನ್ಲ್ ಆಗಿರಬೇಕಲ್ವಾ. ಬದಲಿಗೆ ಹೆಸರಿಸಿ, ಹೊಡೆದು,ಅನ್ನ ಹಾಕದೆ, ಮೂಲೆಗೆ ತಳ್ಳಿ, ಕೆಲಸ ಕೊಡದೆ‌ಮನೆಗೆ ಓಡಿಸಿ ಇನ್ನೇನೋ‌ಮಾಡ್ತೀವಿ ಅಂದ್ರೆ ಅದಲ್ಲ‌ ಸಂವಾದ. ನಾನು‌ಕೊರೋನಾ ಟೈಮ್ ನಲ್ಲಿ ನೂರಾರು ಮಂದಿ ಅಸಹಾಕರನ್ನು ಬಸ್ ಹತ್ತಿಸಿ ಕಳುಹಿಸುವಾಗ ಅವರನ್ನು ಯಾವ್ ಜಾತಿ ಅಂತ ನಾನು ಕೇಳಲ್ಲಿಲ್ಲ.‌ಅದನ್ನ‌ಮೆಚ್ಚಿ ಕೊಳ್ತೀರಿ, ಅದೇ ಕೆಟ್ಟದ್ದನ್ನು‌ನಾನು ಪ್ರಶ್ನಿಸಿದಾಗ ಬಹಿಷ್ಕಾರ‌ಮಾತು ಹೇಳ್ತೀರಿ. ಇದಲ್ಲ‌ವಾದ- ಸಂವಾದ’ ಎನ್ನುವ ಮೂಲಕ ವಿರೋಧಿಗಳನ್ನು ಪ್ರಶ್ನಿಸುತ್ತಾರೆ ಪ್ರಕಾಶ್ ರೈ.

Related Posts

error: Content is protected !!